• ಕಾರ್ಗಿಲ್ ವಿಜಯ ದಿನ – ಛಾಯಾಚಿತ್ರ ಪ್ರದರ್ಶನ

    • July 26, 2024
    • Posted By : Kapmi Library
    • 0 Comment

     

    ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಜಯ ಸಾಧಿಸಿ ಇಪ್ಪತ್ತೈದು ವರುಷಗಳು ಸಂದ ನೆನಪಿಗಾಗಿ ಶಿವಮೊಗ್ಗದ ಕೇಂದ್ರ ಸಂವಹನ  ಇಲಾಖೆ ವತಿಯಿಂದ ನಗರದ ಅಶೋಕ ಪೈ ಸ್ಮಾರಕ ಕಾಲೇಜಿನಲ್ಲಿ ‘ಕಾರ್ಗಿಲ್ ವಿಜಯ ದಿನ -ರಜತ ಜಯಂತಿ’ ವಿಷಯದ ಕುರಿತು ವಿಶೇಷ ಛಾಯಾಚಿತ್ರ ಪ್ರದರ್ಶನ ಹಮ್ಮಿಕ್ಕೊಳ್ಳಲಾಗಿದೆ.  ಪ್ರದರ್ಶನವನ್ನು ಇಂದು ಭಾರತೀಯ ಸೇನೆಯ ನಿವೃತ್ತ ಯೋಧ ಶ್ರೀ. ರಾಜಶೇಖರ್. ಜೆ ಉದ್ಘಾಟಿಸಿದರು.

    ಬಳಿಕ ಮಾತನಾಡಿದ ಅವರು,  ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವ ಯೋಧರು ನಮ್ಮ ದೇಶದ ಹೆಮ್ಮೆಯಾಗಿದ್ದಾರೆ. ದೇಶ ರಕ್ಷಣೆಗಾಗಿ ರಾತ್ರಿ-ಹಗಲು ಕರ್ತವ್ಯ ನಿರ್ವಹಿಸುವ ಅವರ ಮನೋಸ್ಥೈರ್ಯ ನಮ್ಮಗೆಲ್ಲಾ ಮಾದರಿಯಾಗಬೇಕು. ಇಂದಿನ ಯುವ ಜನಾಂಗ ದೇಶ ರಕ್ಷಣೆಯ ಕಾರ್ಯಕ್ಕೆ ಮುಂದಾಗಬೇಕು ಎಂದರು.

    ಗಡಿಯಲ್ಲಿ ಸೇನಾಕಾರ್ಯ ನಿರ್ವಹಿಸುವ ಸೈನಿಕರ ಶೌರ್ಯವನ್ನು ಸ್ಮರಿಸಲು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಗುತ್ತದೆ. ಅಲ್ಲದೆ, ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲು ಇದೊಂದು ಅವಕಾಶ ಎಂದು ಶ್ರೀ. ರಾಜಶೇಖರ್ ಹೇಳಿದರು.

    ಮಾನಸ ಟ್ರಸ್ಟ್ ನ ನಿರ್ದೇಶಕಿ, ಡಾ. ರಜನಿ. ಎ. ಪೈ, ಲೇಖಕರಾದ ಡಾ. ರಾಜೇಂದ್ರ ಚೆನ್ನಿ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ. ಕೆ, ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶ್ರೀಮತಿ. ಅಕ್ಷತಾ ಸಿ. ಹೆಚ್ , ಇಲಾಖೆಯ  ಶ್ರೀ. ಲಕ್ಷ್ಮೀಕಾಂತ್  ಸಿ.ವಿ ಮತ್ತಿತರರು ಉಪಸ್ಥಿತರಿದ್ದರು. 

    ಛಾಯಾಚಿತ್ರ ಪ್ರದರ್ಶನವು ಕಾರ್ಗಿಲ್ ವಿಜಯ ದಿವಸ ಹಾಗೂ ನೂತನ ಕ್ರಿಮಿನಲ್ ಕಾನೂನುಗಳ ಕುರಿತ ಮಾಹಿತಿ ಫಲಕಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಜುಲೈ 30 ರವರೆಗೆ ಕಾಲೇಜು ಆವರಣದಲ್ಲಿ ಉಚಿತವಾಗಿ ತೆರೆದಿರುತ್ತದೆ.

     

     

No comments found

LEAVE COMMENT

Your email address will not be published. Required fields are marked *

Teaching Positions are Open for for M Phil Clinical Psychology  Apply Now 

M Phil applications are open for the academic year 2024 - 25    Apply Now

Last date to reach the M Phil application to the college office on or before 30 September 2024.

Online Registration
close slider